#MlrLitFest
  • mlrlitfest@gmail.com

ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾ : ಪ್ರಕಾಶ್ ಬೆಳವಾಡಿ

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ಐದನೇ ಗೋಷ್ಠಿ ‘Kashmir files – reel and real’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ್ ಬೆಳವಾಡಿ, ಸಹನಾ ವಿಜಯ್ ಕುಮಾರ್ ಭಾಗವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬೆಳವಾಡಿ ಮಾತನಾಡಿ , ಸಿನಿಮಾವನ್ನು ಎರಡು ಗಂಟೆಗಳಲ್ಲಿ ಕಟ್ಟಿಕೊಡಬೇಕು. ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾವಾಗಿದೆ. ಚಿತ್ರ ಹಲವು ಸತ್ಯ ಶೋಧನೆಗೆ ಸಾಕ್ಷಿಯಾಗಿದೆ, ಹೀಗಾಗಿ

  Read More

ಕನ್ನಡದ ರಾಜಮನೆತನಗಳು

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ನಾಲ್ಕನೇ ಗೋಷ್ಠಿ ‘ಕನ್ನಡದ ರಾಜಮನೆತನಗಳು’ ಎಂಬ ವಿಷಯದ ಮೇಲೆ ನಡೆಯಿತು. ಡಾ. ಸೋಂದಾ ಲಕ್ಷ್ಮೀಶ ಹೆಗಡೆ ಮಾತನಾಡಿ ಶಾಸ್ತ್ರ ಮತ್ತು ಸೂತ್ರಗಳಿಗೆ ಕಲಶಪ್ರಾಯವಾಗಿರುವಂತೆ ಮೌರ್ಯರ ಆಡಳಿತವಿತ್ತು. ಕದಂಬರು ಭಾಷೆಗೆ ಪ್ರಮುಖ ಆದ್ಯತೆಯನ್ನು ನೀಡಿದ್ದರು. ಕನ್ನಡದ ಪ್ರಥಮ ಶಾಸನವಾದ ತಾಳಗುಂದದ ಸಿಂಹಖಟಾಂಜನ ಶಾಸನ ಕದಂಬರ ಕಾಲದ ಆಡಳಿತದಲ್ಲಿ ಭಾಷೆಗೆ ಆದ್ಯತೆ ನೀಡಿದ ಕುರುಹುಗಳು ಲಭ್ಯವಿದೆ. ಇತಿಹಾಸ ಓತಪ್ರೋತವಾಗಿದೆ. ನಾವು ಪಠ್ಯಗಳಲ್ಲಿ ಕಲಿಯುವ

  Read More

ಆಧ್ಯಾತ್ಮಿಕ ಮತ್ತು ಲೌಕಿಕ ಜೀವನವನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ – ಡಾ. ಜಿ. ಬಿ. ಹರೀಶ್

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತಿಯ ಎರಡನೇ ದಿನದ ಎರಡನೇ ಗೋಷ್ಠಿ ‘ ಕನ್ನಡಿಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ’ ಎಂಬ ವಿಷಯದ ಮೇಲೆ ನಡೆಯಿತು. ಈ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜೆ.ಬಿ ಹರೀಶ, ಡಾ. ನಿರಂಜನ ವಾನಳ್ಳಿ ಮತ್ತು ಜಿ.ಆರ್ ಸಂತೋಷ್ ಭಾಗವಹಿಸಿದರು. ಡಾ. ಜೆ.ಬಿ ಹರೀಶ ಮಾತನಾಡಿ, ಆಧ್ಯಾತ್ಮಿಕ ಮತ್ತು ಲೌಕಿಕತೆಯನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ. ಸಂಸ್ಕೃತಿ, ನಾಗರಿಕತೆ ಅನ್ನುವುದನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾರತೀಯ

  Read More

ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕಲಿಕೆಯು ರೂಪುಗೊಳ್ಳಬೇಕು – ನಿತಿನ್ ಶ್ರೀಧರ್

ಭಾರತ್ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಮಂಗಳೂರು ಲಿಟ್ ಫೆಸ್ಟ್­ನ ಎರಡನೇ ದಿನದ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೂರನೇ ಗೋಷ್ಠಿಯು’ civilization Narrative’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಿತಿನ್ ಶ್ರೀಧರ್, ಸಾಯಿಸ್ವರೂಪ ಅಯ್ಯರ್, ಆಮಿ ಗನಾತ್ರ ಭಾಗವಹಿಸಿದರು. ಈ ಸಂಧರ್ಭದಲ್ಲಿ ಸಂವಾದದಲ್ಲಿ ಮಾತನಾಡಿದ ನಿತಿನ್ ಶ್ರೀಧರ್, ಜ್ಞಾನವೇ ನಾಗರಿಕತೆಯ ಮೂಲವಾಗಿದೇ. ಪುರಾಣದಲ್ಲಿ ಘಟಿಸಿದ ಪ್ರತಿಯೊಂದು ಘಟನೆಗಳನ್ನೂ ವಿವಿಧ ಆಯಾಮಗಳಲ್ಲಿ ಅವಲೋಕಿಸಲಾಗಿದ್ದು, ಇದು ಅಂತಿಮವಾಗಿ ಧರ್ಮದ ಸತ್ಯ ವನ್ನು ಪ್ರತಿಪಾದಿಸುತ್ತದೆ. ಧರ್ಮವು ಅಗಾಧ

  Read More

ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು – ರೋಹಿತ್‌ ಚಕ್ರತೀರ್ಥ

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದಂದು ಮೊದಲನೇ ಗೋಷ್ಠಿಯಲ್ಲಿ ಪಠ್ಯ ವಿಮರ್ಶೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರೋಹಿತ್‌ ಚಕ್ರತೀರ್ಥ ಮತ್ತು ಅರವಿಂದ ಚೊಕ್ಕಾಡಿ ಅವರು ಮಾತನಾಡಿದರು. ಭಾರತೀಯ ಪದ್ಧತಿಯಲ್ಲಿ ಪಠ್ಯಪುಸ್ತಕದ ಪರಿಕಲ್ಪನೆ ಇರಲಿಲ್ಲ. ವೇದ, ಶಾಸ್ತ್ರಗಳನ್ನು ಹೊರತುಪಡಿಸಿ ಎಲ್ಲವೂ ಲೌಕಿಕ ಜ್ಞಾನ ಕೇಂದ್ರಿತವಾಗಿತ್ತು. ಗುರುವಿನಿಂದ ಶಿಷ್ಯನಿಗೆ ಕ್ರಿಯೆಯ ಮೂಲಕ ಜ್ಞಾನ ಪ್ರಸಾರವಾಗುತ್ತಿತ್ತು. ಬ್ರಿಟಿಷ್ ವಸಾಹತುಶಾಹಿ ಆರಂಭದ ಬಳಿಕ ಪಠ್ಯದ ಮೂಲಕ ಕಲಿಸುವ ಶಿಕ್ಷಣ ವ್ಯವಸ್ಥೆ ಆರಂಭವಾಯಿತು. ಭಾರತೀಯ ವಿದ್ಯಾರ್ಥಿಗಳು

  Read More

Day 1 Program Media Reports

Online News  ಮಂಗಳೂರು ಲಿಟ್ ಫೆಸ್ಟ್ ಗೆ ಚಾಲನೆ ಮಂಗಳೂರು : ಲಿಟ್‌ ಫೆಸ್ಟ್‌ ಉದ್ಘಾಟನಾ ಸಮಾರಂಭ ಮಂಗಳೂರು ಲಿಟ್‌ ಫೆಸ್ಟ್‌ : ಶತಾವಧಾನಿ ಡಾ. ಆರ್.‌ ಗಣೇಶ್‌ ಅವರಿಂದ ವಿದ್ಯುಕ್ತ ಚಾಲನೆ  

  Read More

ಸುಭಾಷ್ ಚಂದ್ರ ಬೋಸರ ಜೀವನ ಅನೇಕ ನಿಗೂಢಗಳ ಜೊತೆಗೆ ಅಡಗಿ ಹೋಗಿದೆ – ಚಂದ್ರಚೂರ್ ಘೋಷ್

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎಂಟನೇ ಗೋಷ್ಠಿ ‘Bose: The Untold story’ ಎಂಬ ವಿಷಯದ ಮೇಲೆ ನಡೆಯಿತು. ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಂಶೋಧಕರಾದ ಚಂದ್ರ ಚೂರ್ ಘೋಷ್ ಹಾಗೂ ಅನುಜ್ ಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಚೂರ್ ಘೋಷ್ ಈ ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆಗೆ, ಸುಭಾಷ್ ಚಂದ್ರಬೋಸರ 125ನೇ ವರ್ಷದ ಜಯಂತಿಯೂ ಹೌದು. ಸುಭಾಷ್ ಚಂದ್ರ ಬೋಸರ ಜೀವನ ಅನೇಕ

  Read More

ದೇಶ – ಕಾಲ -ಕಲೆ : ಜನಪದ ಸಾಹಿತ್ಯದ ಕೊಡುಗೆ ಅಪಾರ – ಡಾ. ನಾಗರಾಜ್

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ ‘ ದೇಶ- ಕಾಲ-ಕಲೆ ‘ಎಂಬ ವಿಷಯದ ಮೇಲೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನಾಗರಾಜ್ ಮತ್ತು ಡಾ. ರಾಮ ಮೂಲಗಿ ಸಂವಾದ ನಡೆಸಿದರು. ಸಂವಾದದಲ್ಲಿ ಮಾತನಾಡಿದ ಡಾ. ನಾಗರಾಜ್, ಜನಪದ ಸಾಹಿತ್ಯ ಸಾಗರದಷ್ಟು ಆಳ, ಹೆತ್ತ ತಾಯಿ ಮತ್ತು ಹೊತ್ತ ಭೂಮಿಯಷ್ಟು ಪವಿತ್ರ. ಅತ್ಯಮೂಲ್ಯ ಸಂಸ್ಕೃತಿಯನ್ನು ದೇಶವಾಸಿಗಳು ಪಾಲಿಸಲು ಜನಪದ ಸಾಹಿತ್ಯದ ಕೊಡುಗೆ ಅಪಾರ. ನಮ್ಮ ನಾಡಿನ ನೆಲದ ಸೊಗಡನ್ನು ಪರಿಚಯಿಸುವ

  Read More

ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶ : ಪ್ರೊ. ರಮೇಶ್ ಗಣೇಶನ್

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ State of the Economy ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ರಮೇಶ್ ಗಣೇಶನ್ ಮತ್ತು ಡಾ. ವಿನೋದ್ ಅಣ್ಣಿಗೇರಿ ಭಾಗವಹಿಸಿದರು. ಸಂವಾದದಲ್ಲಿ ಮಾತನಾಡಿದ ಪ್ರೊ. ರಮೇಶ್ ಗಣೇಶನ್ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಕಾಣಲಿದೆ. ತಂತ್ರಜ್ಞಾನ, ವೇಗದ ಬೆಳವಣಿಗೆಗೆ ಅಡಿಪಾಯವಾಗಿದೆ. ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ಆಹಾರ

  Read More

ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು : ಡಾ. ಬಿ.ವಿ ವಸಂತ ಕುಮಾರ್

ಭಾರತ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್­ನ ಐದನೇ ಗೋಷ್ಠಿ 75 ವರುಷಕ್ಕೆ 75 ನೆನಪುಗಳು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಬಿ.ವಿ ವಸಂತ ಕುಮಾರ್ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜನ್ಮಭೂಮಿ ಮತ್ತು ಜನನಿ ಸ್ವರ್ಗಕ್ಕಿಂತ ಮಿಗಿಲು. ಧರ್ಮವನ್ನು ಮೀರಿ ನಾವು ದೇಶವನ್ನು ಪ್ರೀತಿಸಬೇಕು. ಅದಕ್ಕಾಗಿ ಚರಿತ್ರೆಯನ್ನು ಕಲಿಯಬೇಕು. ಚರಿತ್ರೆ ಮುಗಿದ ಅಧ್ಯಯನವಾಗದೆ, ಮುಂದೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಬೇಕು. 1948ರಲ್ಲಿ ಅಂಬೇಡ್ಕರ್ ಜಾರಿಗೆ ತಂದ ಹಿಂದೂ ಕೋಡ್ ಭಾರತದ ಜಾಗೃತಿಯ ಬಗ್ಗೆ ಚಿಂತಿಸಿದ್ದರು. ದೇಶ

  Read More