<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Sessions 2018 Archives - Mangaluru</title>
	<atom:link href="https://mlrlitfest.org/category/sessions-2018/feed/" rel="self" type="application/rss+xml" />
	<link>https://mlrlitfest.org/category/sessions-2018/</link>
	<description>Literature Fest</description>
	<lastBuildDate>Wed, 14 Nov 2018 12:15:17 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9</generator>
	<item>
		<title>ಮಂಗಳೂರು ಲಿಟ್ ಫೆಸ್ಟ್‌ 2018 ಸಮಾರೋಪ</title>
		<link>https://mlrlitfest.org/valedictory-function/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 13:01:18 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=438</guid>

					<description><![CDATA[<p>ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಲಿಟ್ ಫೆಸ್ಟ್‌ ಸಾಹಿತ್ಯ ಉತ್ಸವ ನವೆಂಬರ್ 4ರ ಸಂಜೆ ವಿದ್ಯುಕ್ತವಾಗಿ ತೆರೆ ಕಂಡಿತು. ಎರಡು ದಿನಗಳಲ್ಲಿ ಹದಿನೆಂಟು ತುಂಬಿದ ಸಭೆಗಳನ್ನು ಕಂಡ ಮಂಗಳೂರು ಲಿಟ್ ಫೆಸ್ಟ್‌ ಮಂಗಳೂರಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಸಾಹಿತ್ಯಪ್ರಿಯರ ಮನತಣಿಸಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದ್ಮಭೂಷಣ ಡಾ. ಬಿ.ಎಂ.ಹೆಗ್ಡೆ ಅವರು ಭಾರತೀಯ ಔಷಧ ಪದ್ಧತಿಯ ಆಯುರ್ವೇದ ವಿಜ್ಞಾನದ ಮಹತ್ವಗಳನ್ನು ವಿವರಿಸಿದರು.</p>
<p>The post <a href="https://mlrlitfest.org/valedictory-function/">ಮಂಗಳೂರು ಲಿಟ್ ಫೆಸ್ಟ್‌ 2018 ಸಮಾರೋಪ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p style="text-align: justify;"><img fetchpriority="high" decoding="async" class="aligncenter size-full wp-image-112938" src="https://news13.in/wp-content/uploads/2018/11/closing-ceremony-2.jpg" alt="" width="600" height="450" /></p>
<p style="text-align: justify;">ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಲಿಟ್ ಫೆಸ್ಟ್‌ ಸಾಹಿತ್ಯ ಉತ್ಸವ ನವೆಂಬರ್ 4ರ ಸಂಜೆ ವಿದ್ಯುಕ್ತವಾಗಿ ತೆರೆ ಕಂಡಿತು.</p>
<p style="text-align: justify;">ಎರಡು ದಿನಗಳಲ್ಲಿ ಹದಿನೆಂಟು ತುಂಬಿದ ಸಭೆಗಳನ್ನು ಕಂಡ ಮಂಗಳೂರು ಲಿಟ್ ಫೆಸ್ಟ್‌ ಮಂಗಳೂರಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಸಾಹಿತ್ಯಪ್ರಿಯರ ಮನತಣಿಸಿತು.</p>
<p style="text-align: justify;">ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದ್ಮಭೂಷಣ ಡಾ. ಬಿ.ಎಂ.ಹೆಗ್ಡೆ ಅವರು ಭಾರತೀಯ ಔಷಧ ಪದ್ಧತಿಯ ಆಯುರ್ವೇದ ವಿಜ್ಞಾನದ ಮಹತ್ವಗಳನ್ನು ವಿವರಿಸಿದರು.</p>
<p style="text-align: justify;">ಭಾರತೀಯ ಆಧ್ಯಾತ್ಮಿಕ, ವೈಜ್ಞಾನಿಕ, ವ್ಯಾವಹಾರಿಕ ಜ್ಞಾನಗಳ ಬಗ್ಗೆ ವಿವರಿಸಿದ ಗೋವಾ NITTE ಗೋವಾದ ಪ್ರಾಂಶುಪಾಲರಾದ ಗೋಪಾಲ್ ಮುಗ್ರೆ ಅವರು, ಇದೀಗ ವಿದ್ಯಾರ್ಥಿಗಳು ಭಾರತದಲ್ಲೇ ಇದ್ದು ಸಾಧಿಸಲು ಮುಂದಾಗುತ್ತಿರುವ ಸಕಾರಾತ್ಮಕ‌ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದರು.</p>
<p style="text-align: justify;">ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಚಾಲಕರಾದ  ಜೆ. ನಂದಕುಮಾರ್ ಅವರು ಮಾತನಾಡುತ್ತಾ, ಭಾರತೀಯ ಪರಿಕಲ್ಪನೆಯೆನ್ನುವುದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಆದ್ದರಿಂದ ಆಂಗ್ಲರು ಬಂದ ನಂತರ ಇಂಡಿಯಾವನ್ನು ಕಟ್ಟಲಾಯಿತು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ವಿವರಿಸಿದ ಅವರು ಭಾರತ್ ತೇರೇ ತುಕಡೇ ಹೋಂಗೇ ಎನ್ನುವ ಘೋಷಣೆಗಳನ್ನು ಹೊರಡಿಸುತ್ತಿರುವವರ ಹಿಂದಿನ ಆಘಾತಕಾರೀ ಸಂಚುಗಳನ್ನು ವಿವರಿಸಿದರು. ಶ್ರೇಷ್ಠ ಸಂಸ್ಕೃತಿಯುಳ್ಳವನು ಎನ್ನುವ ಅರ್ಥವಿರುವ ಆರ್ಯ ಎನ್ನುವ ಪದದ ಅರ್ಥವನ್ನು ಉದ್ದೇಶವಾಗಿ ಹೇಗೆ ತಿರುಚಲಾಗಿದೆ ಎನ್ನುವುದನ್ನು ಅವರು ಎಳೆ ಎಳೆಯಾಗಿ ಬಿಡಿಸಿಟ್ಟರು. ಮಂಗಳೂರು ಲಿಟ್ ಫೆಸ್ಟ್‌ ಎನ್ನುವ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರಿಗೆ ಅವರು ಅಭಿನಂದನೆ ಸಲ್ಲಿಸಿದರು.</p>
<p style="text-align: justify;">ಎರಡು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು.</p>
<p>The post <a href="https://mlrlitfest.org/valedictory-function/">ಮಂಗಳೂರು ಲಿಟ್ ಫೆಸ್ಟ್‌ 2018 ಸಮಾರೋಪ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯ</title>
		<link>https://mlrlitfest.org/regional-art-culture-literature/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:59:08 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=436</guid>

					<description><![CDATA[<p>Day 2 &#8211; 04-11-2018 at 2.15 pm @ Two Sides : Regional Art Culture &#38; Literature ಮಂಗಳೂರು: ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ರೀಜಿನಲ್ ಆರ್ಟ್, ಕಲ್ಚರ್ ಆಂಡ್ ಲಿಟ್ರೇಚರ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು ಇದರಲ್ಲಿ ಚಂದ್ರಶೇಖರ್ ದಾಂಬ್ಲೆ, ಡಾ. ನರೇಂದ್ರ ರೈ ದೇರ್ಲ, ಡಾ. ಮಂಟಪ್ ಪ್ರಭಾಕರ್ ಜೋಶಿ, ಗುರುದತ್ ಬಂಟ್ವಾಳ್ಕರ್ ಭಾಗವಹಿಸಿದ್ದರು. ಭಾರತೀಯ ಕಲೆ, ಕೃಷಿ, ಸಾಹಿತ್ಯ, ಭಾಷೆಗಳಲ್ಲಿ ಭಾರತದ ಪರಿಕಲ್ಪನೆ ಅತ್ಯಂತ ಉದಾತ್ತವಾಗಿದೆ. ಸ್ಥಳೀಯವೆನಿಸಿದ ಕಲೆಗಳು</p>
<p>The post <a href="https://mlrlitfest.org/regional-art-culture-literature/">ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 2.15 pm @ Two Sides : Regional Art Culture &amp; Literature</strong></p>
<p style="text-align: justify;"><img decoding="async" class="aligncenter size-full wp-image-112935" src="https://news13.in/wp-content/uploads/2018/11/ACL-11.jpg" alt="" width="600" height="450" /></p>
<p style="text-align: justify;"><strong>ಮಂಗಳೂರು:</strong> ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ರೀಜಿನಲ್ ಆರ್ಟ್, ಕಲ್ಚರ್ ಆಂಡ್ ಲಿಟ್ರೇಚರ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು ಇದರಲ್ಲಿ ಚಂದ್ರಶೇಖರ್ ದಾಂಬ್ಲೆ, ಡಾ. ನರೇಂದ್ರ ರೈ ದೇರ್ಲ, ಡಾ. ಮಂಟಪ್ ಪ್ರಭಾಕರ್ ಜೋಶಿ, ಗುರುದತ್ ಬಂಟ್ವಾಳ್ಕರ್ ಭಾಗವಹಿಸಿದ್ದರು.</p>
<p style="text-align: justify;">ಭಾರತೀಯ ಕಲೆ, ಕೃಷಿ, ಸಾಹಿತ್ಯ, ಭಾಷೆಗಳಲ್ಲಿ ಭಾರತದ ಪರಿಕಲ್ಪನೆ ಅತ್ಯಂತ ಉದಾತ್ತವಾಗಿದೆ. ಸ್ಥಳೀಯವೆನಿಸಿದ ಕಲೆಗಳು ಒಂದೊಂದು ಬಗೆಯಲ್ಲಿ, ಒಂದೊಂದು ವಿಧಾನದಲ್ಲಿ ದೇಶದ ಎಲ್ಲಾ ಕಡೆಯೂ ಅಸ್ತಿತ್ವದಲ್ಲಿದೆ. ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯವಿದೆ ಎಂಬ ಅನಿಸಿಕೆಗಳು ಈ ಸಂವಾದದಲ್ಲಿ ವ್ಯಕ್ತವಾದವು.</p>
<p style="text-align: justify;">ಪ್ರಭಾಕರ್ ಜೋಶಿ ಮಾತನಾಡಿ, ದಕ್ಷಿಣ ಕನ್ನಡ ಜನತೆಗೆ ಹೆಚ್ಚಿನ ವೈಚಾರಿಕತೆ ಇದೆ. ಇದೇ ಕಾರಣಕ್ಕೆ ಯಕ್ಷಗಾನದಂತಹ ಕಲೆಗಳು ಇಲ್ಲಿ ಉಗಮವಾಗಿದೆ. ಭಾರತೀಯ ಪಾರಂಪರಿಕ ಕಲೆಗಳನ್ನು ಯಾವುದೇ ಕಾರಣಕ್ಕೂ ವರ್ಗೀಕರಣಗೊಳಿಸಲು ಸಾಧ್ಯವಿಲ್ಲ. ಅವೆಲ್ಲವೂ ಅಖಿಲ ಭಾರತದ ಕಲೆಗಳಾಗಿವೆ. ಇಡೀ ಭಾರತೀಯತೆಯನ್ನು ಕಟ್ಟಿಕೊಡುವ ಅದ್ಭುತ ಶಕ್ತಿ ಯಕ್ಷಗಾನದಂತಹ ಕಲೆಗಳಿವೆ. ನಮ್ಮ ಸಂಸ್ಕೃತಿಯಲ್ಲಿ ದೈವನಿಂದನೆಯೂ ಕಲೆಯ ಭಾಗವಾಗಿದ್ದು, ಇದರ ಧರ್ಮಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಸ್ಥಳಿಯ ಕಲಾವಿದರನ್ನು ಸ್ಥಳಿಯವಾಗಿ ಪರಿಗಣಿಸಬಾರದು. ಅವರನ್ನು ಭಾರತೀಯ ಕಲಾವಿದರು ಎಂದು ಗೌರವಿಸಬೇಕು ಎಂದರು.</p>
<p style="text-align: justify;">ನರೇಂದ್ರ ದೇರ್ಲ ಮಾತನಾಡಿ, ಅಪ್ಪಟ ಭಾರತೀಯ ಕೃಷಿಯಲ್ಲಿ ಭಾರತೀಯತೆ ಇದೆ. ಆದರೆ ಇಂದು ಕೃಷಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಲ್ಯಾಟಿನ್‌ನಲ್ಲಿ ಕ್ಲಪ್ಚೋ ಎಂದರೆ ನೇಗಿಲ ತುದಿಗೆ ಕಟ್ಟಿದ ಕಬ್ಬಿಣದ ಸಲಾಕೆ. ಅದರಿಂದಲೇ ಕಲ್ಚರ್ ಎಂಬ ಶಬ್ದ ಬಂತು, ಬಳಿಕ ಅಗ್ರಿಕಲ್ಚರ್ ಎಂಬ ಶಬ್ದ ಬಂತು. ಆದರೆ ಈ ಭೂಮಿಯ ಮೊದಲ ಸಂಸ್ಕೃತಿಯೇ ಅಗ್ರಿಕಲ್ಚರ್. ದೇಗುಲದ ಕೊಡಿಮರಕ್ಕೆ ತುಳುನಾಡಿನ ಜನ ಭತ್ತದ ಬೀಜ ಕಟ್ಟುತ್ತಾರೆ, ದೇಗುಲ ಮುಳುಗಿದರೂ ಬದುಕುಳಿದ ಮಂದಿಗೆ ಕೊಡಿಮರದಲ್ಲಿನ ಬೀಜ ಬದುಕಿನ ಆಧಾರವಾಗಲಿ ಎಂಬ ಉದಾತ್ತ ಚಿಂತನೆ ಇದರಲ್ಲಿದೆ. ಭತ್ತದ ಕೃಷಿ ಜನಕೇಂದ್ರೀತ ಕೃಷಿಯಾಗಿದ್ದು, ಪಾಡ್ದನದಂತಹ ಜನಪದವನ್ನೂ ಇದು ಒಳಗೊಂಡಿದೆ. ಆದರೆ ಹಣ ಬಂದ ಬಳಿಕ ಕೃಷಿಗೂ ಬೇಲಿ ಹಾಕಲಾಗಿದೆ ಎಂದು ವಿಷಾದಿಸಿದರು.</p>
<p style="text-align: justify;">ಬಂಟ್ವಾಳ್ಕರ್ ಮಾತನಾಡಿ, ಗೋವಾದಿಂದ ಬಂದ ಸಾರಸ್ವತರನ್ನು ಕರಾವಳಿಗರು ಎಂದೂ ಬೇರೆಯವರಾಗಿ ನೋಡಿಲ್ಲ, ಕೊಂಕಣಿಯರು ದೇಗುಲ ನಿರ್ಮಾಣ ಮಾಡಿದರೂ ಘರ್ಷಣೆಗಳು, ಗೊಂದಲಗಳು ಇಲ್ಲಿ ಸಂಭವಿಸಿಲ್ಲ. ಭಾರತೀಯತೆಯ ಪರಿಕಲ್ಪನೆ ಇದಕ್ಕೆ ಕಾರಣ ಎಂದರು.</p>
<p>The post <a href="https://mlrlitfest.org/regional-art-culture-literature/">ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ</title>
		<link>https://mlrlitfest.org/kannada-kadegolinalli-bharatha-mathana/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:58:05 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=432</guid>

					<description><![CDATA[<p>Day 2 &#8211; 04-11-2018 at 2.15 pm @ Manthan : ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ರಾಷ್ಟ್ರೀಯತೆಗೆ ಒತ್ತು ಕೊಡುವಂತಹಾ ವಿಚಾರಗಳೇ ಹೆಚ್ಚಾಗಿ ಚರ್ಚೆಗೆ ಬಂದಿದ್ದ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧೀ ಶಕ್ತಿಗಳ ಕಾರ್ಯತಂತ್ರಗಳ ಕುರಿತಾಗಿ ಸಾಕಷ್ಟು ಚಿಂತನ ಮಂಥನಗಳು ನಡೆದಿದ್ದವು. ಲಿಟ್ ಫೆಸ್ಟ್­ನ ಎರಡನೆಯ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ &#8220;ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ&#8221; ಎನ್ನುವ ಸಂವಾದದಲ್ಲಿ, ದೇಶದ ಅತೀ ದೊಡ್ಡ ಬಹುಸಂಖ್ಯಾತ ಸಮುದಾಯವನ್ನು ಎದುರು ಹಾಕಿಕೊಂಡೂ ಭಾರತ ವಿರೋಧೀ ಶಕ್ತಿಗಳು,</p>
<p>The post <a href="https://mlrlitfest.org/kannada-kadegolinalli-bharatha-mathana/">ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 2.15 pm @ Manthan : ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ</strong></p>
<p><img decoding="async" class="size-full wp-image-433 aligncenter" src="https://mlrlitfest.org/wp-content/uploads/2018/11/bharatha-mathana.jpg" alt="" width="600" height="393" srcset="https://mlrlitfest.org/wp-content/uploads/2018/11/bharatha-mathana.jpg 600w, https://mlrlitfest.org/wp-content/uploads/2018/11/bharatha-mathana-300x197.jpg 300w" sizes="(max-width: 600px) 100vw, 600px" /></p>
<p style="text-align: justify;">ರಾಷ್ಟ್ರೀಯತೆಗೆ ಒತ್ತು ಕೊಡುವಂತಹಾ ವಿಚಾರಗಳೇ ಹೆಚ್ಚಾಗಿ ಚರ್ಚೆಗೆ ಬಂದಿದ್ದ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧೀ ಶಕ್ತಿಗಳ ಕಾರ್ಯತಂತ್ರಗಳ ಕುರಿತಾಗಿ ಸಾಕಷ್ಟು ಚಿಂತನ ಮಂಥನಗಳು ನಡೆದಿದ್ದವು.</p>
<p style="text-align: justify;">ಲಿಟ್ ಫೆಸ್ಟ್­ನ ಎರಡನೆಯ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ &#8220;ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ&#8221; ಎನ್ನುವ ಸಂವಾದದಲ್ಲಿ, ದೇಶದ ಅತೀ ದೊಡ್ಡ ಬಹುಸಂಖ್ಯಾತ ಸಮುದಾಯವನ್ನು ಎದುರು ಹಾಕಿಕೊಂಡೂ ಭಾರತ ವಿರೋಧೀ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಕೆಲವು ನಿರ್ದಿಷ್ಟ ಭಾರತ ವಿರೋಧೀ ಮಾಧ್ಯಮಗಳು ಅದು ಹೇಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಯಿತು ಎನ್ನುವ ಬಗ್ಗೆ ಗಂಭೀರ ಚಿಂತನೆಗಳು ನಡೆದವು.</p>
<p style="text-align: justify;">ಅಂತಹಾ ಮಾಧ್ಯಮಗಳ ಕಾರ್ಯತಂತ್ರಗಳು ಹೇಗೆಲ್ಲಾ ಇರುತ್ತವೆ ಎನ್ನುವ ಬಗ್ಗೆಯೂ ಚರ್ಚೆಯಾಯಿತು. ಭಾರತ ಮಾತೆ, ವಂದೇ ಮಾತರಂ ಮುಂತಾದವುಗಳು ರಿಲಿಜಿಯಸ್ ನ್ಯಾಷನಲಿಸಂ ಎನ್ನುವಂತೆ ಬಿಂಬಿಸಿ ಭಾರತವನ್ನು ಕೇವಲ ಒಂದು ಭೂಭಾಗವಾಗಿಯಷ್ಟೇ ನೋಡುವ ಸಂಕುಚಿತ ಮನೋಭಾವನೆಯನ್ನು ಕೆಲವು ಮಾಧ್ಯಮಗಳ ಮೂಲಕ ಹೇಗೆ ಬೆಳೆಸಲಾಯಿತು ಎನ್ನುವ ಬಗ್ಗೆಯೂ ಬೆಳಕು ಚೆಲ್ಲಲಾಯಿತು.</p>
<p style="text-align: justify;">ಇತ್ತೀಚಿನ ದಿನಗಳಲ್ಲಿ,ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿ ಚಾಲ್ತಿಗೆ ಬಂದ ನಂತರ ದೇಶವಾಸಿಗಳಲ್ಲಿ ರಾಷ್ಟ್ರೀಯತೆಯ ಭಾವನೆಗಳು ಜಾಗೃತಗೊಳ್ಳುತ್ತಿರುವುದರ ಜೊತೆ ಜೊತೆಗೇ ನಿಜವಾದ ಶತ್ರುಗಳು ಯಾರು ಎನ್ನುವುದೂ ತಿಳಿಯತೊಡಗಿದೆ, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಸಹನಾ ವಿಜಯಕುಮಾರ್ ಹಾಗೂ ಡಾ. ಅಜಕ್ಕಳ ಗಿರೀಶ್ ಭಟ್ ಅವರೊಂದಿಗೆ ರೋಹಿತ್ ಚಕ್ರತೀರ್ಥ ಅವರು ನಡೆಸಿದ ಆ ಸಂವಾದದಲ್ಲಿ ಇಂತಹಾ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದವು.</p>
<p>The post <a href="https://mlrlitfest.org/kannada-kadegolinalli-bharatha-mathana/">ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಹಿಂದೂ ಮೌಲ್ಯ, ಭಾರತೀಯತೆಯ ನಾಶ ಕಮ್ಯೂನಿಷ್ಟ್, ಜಿಹಾದಿಗಳ ಗುರಿ</title>
		<link>https://mlrlitfest.org/engineered-violence-in-kerala-kashmir/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:52:42 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=430</guid>

					<description><![CDATA[<p>Day 2 &#8211; 04-11-2018 at 12.30 pm @ Two Sides : Engineered Violence in Kerala &#38; Kashmir ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ಎಂಜಿನಿಯರ್&#x200d;ಡ್ ವೈಲೆನ್ಸ್ ಇನ್ ಕೇರಳ ಆಂಡ್ ಕಾಶ್ಮೀರ್’ ಎಂಬ ವಿಷಯದ ಬಗ್ಗೆ ಸಂವಾದ ಜರುಗಿದ್ದು, ಮೇಜರ್ ಗೌರವ್ ಆರ್ಯ, ಪ್ರಜ್ಞಾ ಪ್ರವಾಹದ ಸಂಚಾಲಕರಾದ ನಂದಕುಮಾರ್ ಹಾಗೂ ಸಂದೀಪ್ ಬಾಲಕೃಷ್ಣ ಭಾಗವಹಿಸಿದ್ದರು. ನಂದಕುಮಾರ್ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್ ಕೃಪಾಪೋಷಿತ ಹಿಂಸಾಚಾರ ನಡೆಯುತ್ತಿದೆ. ಸಿರಿಯಾ, ಕಾಶ್ಮೀರಕ್ಕೆ ಹೋಗಲು ಸಿದ್ಧರಿರುವ ಪತ್ರಕರ್ತರು ಇಲ್ಲಿಗೆ</p>
<p>The post <a href="https://mlrlitfest.org/engineered-violence-in-kerala-kashmir/">ಹಿಂದೂ ಮೌಲ್ಯ, ಭಾರತೀಯತೆಯ ನಾಶ ಕಮ್ಯೂನಿಷ್ಟ್, ಜಿಹಾದಿಗಳ ಗುರಿ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 12.30 pm @ Two Sides : Engineered Violence in Kerala &amp; Kashmir</strong></p>
<p style="text-align: justify;"><img loading="lazy" decoding="async" class="aligncenter size-full wp-image-112928" src="https://news13.in/wp-content/uploads/2018/11/Maj-Gaurav-1.jpg" alt="" width="600" height="450" /></p>
<p style="text-align: justify;">ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ಎಂಜಿನಿಯರ್&#x200d;ಡ್ ವೈಲೆನ್ಸ್ ಇನ್ ಕೇರಳ ಆಂಡ್ ಕಾಶ್ಮೀರ್’ ಎಂಬ ವಿಷಯದ ಬಗ್ಗೆ ಸಂವಾದ ಜರುಗಿದ್ದು, ಮೇಜರ್ ಗೌರವ್ ಆರ್ಯ, ಪ್ರಜ್ಞಾ ಪ್ರವಾಹದ ಸಂಚಾಲಕರಾದ ನಂದಕುಮಾರ್ ಹಾಗೂ ಸಂದೀಪ್ ಬಾಲಕೃಷ್ಣ ಭಾಗವಹಿಸಿದ್ದರು.</p>
<p style="text-align: justify;">ನಂದಕುಮಾರ್ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್ ಕೃಪಾಪೋಷಿತ ಹಿಂಸಾಚಾರ ನಡೆಯುತ್ತಿದೆ. ಸಿರಿಯಾ, ಕಾಶ್ಮೀರಕ್ಕೆ ಹೋಗಲು ಸಿದ್ಧರಿರುವ ಪತ್ರಕರ್ತರು ಇಲ್ಲಿಗೆ ಬಂದು ಹಿಂಸಾಚಾರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ, ಅವರು ಕಮ್ಯೂನಿಸ್ಟ್ ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದಾರೆ. ಕೇರಳದಲ್ಲಿ ಹಿಂದೂ ಧರ್ಮ, ಮೌಲ್ಯಗಳನ್ನು ನಾಶ ಮಾಡುವುದೇ ಕಮ್ಯೂನಿಷ್ಟರ ಪ್ರಮುಖ ಗುರಿಯಾಗಿದೆ. 1950ರಿಂದಲೂ ಶಬರಿಮಲೆ ಮೌಲ್ಯವನ್ನು ನಾಶ ಮಾಡುವ ಕಾರ್ಯ ಮಿಶನರಿ, ಕಮ್ಯೂನಿಷ್ಟರಿಂದ ನಡೆಯುತ್ತಿದೆ. ಈಗ ಇರುಮುಡಿಯನ್ನೂ ಬಿಚ್ಚಿ, ತನಿಖೆ ನಡೆಸುವ ವಾತಾವರಣ ಅಲ್ಲಿ ಇದೆ. ನಿರಂತರವಾಗಿ ಕೇರಳ ಹಿಂದೂಗಳಲ್ಲಿ ಭಯ ಬಿತ್ತುವ ಕಾರ್ಯ ನಡೆದಿದೆ ಎಂದರು.</p>
<p style="text-align: justify;">ನಿರಂತರವಾಗಿ ಹಿಂದೂಗಳ ಮೇಲೆ ಆಕ್ರಮಣ ಜರುಗಿದ ಪರಿಣಾಮವಾಗಿ ಈಗ ಅಲ್ಲಿ ಹಿಂದೂ ಭಾವನೆಗಳು ಎಚ್ಚೆತ್ತಿದೆ. ಶಬರಿಮಲೆ ಪ್ರಕರಣದಲ್ಲಿ ಇದು ಸ್ಪಷ್ಟವಾಗಿದೆ. ಈ ಭಾವನೆ ಹೀಗೆ ಇದ್ದರೆ, ಶೀಘ್ರದಲ್ಲೇ ಕೇರಳದಲ್ಲಿ ರಾಜಕೀಯ ಚಿತ್ರಣ ಬದಲಾಗುವ ಸನ್ನಿವೇಶ ಸೃಷ್ಟಿಯಾಗಬಹುದು ಎಂದರು.</p>
<p style="text-align: justify;">ಮೇಜರ್ ಗೌರವ್ ಆರ್ಯ ಮಾತನಾಡಿ, ಕಾಶ್ಮೀರದಲ್ಲಿ ಕೇವಲ ಮುಸ್ಲಿಮರು ಇದ್ದಾರೆ ಎಂಬ ಕಾರಣಕ್ಕೆ ಪಾಕಿಸ್ಥಾನಕ್ಕೆ ಕಾಶ್ಮೀರ ಬೇಕು. ಹಿಂದೆ ಪಾಕ್ ಸೇನೆಯ ಧ್ಯೇಯ ಏಕತೆ, ಶಿಸ್ತು ಆಗಿತ್ತು. ಆದರೀಗ ಜಿಹಾದ್ ಅದರ ಧ್ಯೇಯವಾಗಿದೆ. ಇಸ್ಲಾಂ ಮೂಲಭೂತವಾದಿಗಳಿಗಾಗಿ ಅದು ಹೋರಾಡುತ್ತಿದೆ. ಕಾಶ್ಮೀರಿ ಪಂಡಿತರನ್ನು ಓಡಿಸುವ ಕಾರ್ಯ ಹಿಂದಿನಿಂದಲೂ ವ್ಯವಸ್ಥಿತವಾಗಿಯೇ ನಡೆದಿದೆ. ಮತಾಂತರವಾಗುವ, ಓಡಿ ಹೋಗುವ ಮತ್ತು ಸಾಯುವ ಮೂರು ಆಯ್ಕೆಗಳನ್ನು ಅವರ ಮುಂದಿಟ್ಟು ಕ್ರೂರವಾಗಿ ನಡೆದುಕೊಳ್ಳಲಾಗಿದೆ ಎಂದರು.</p>
<p style="text-align: justify;">ಕಾಶ್ಮೀರಕ್ಕೆ ಅದರದ್ದೇ ಆದ ಧ್ವಜವಿದೆ, ಸಂವಿಧಾನವಿದೆ. ಆದರೂ ಅಲ್ಲಿ ಇಸಿಸ್, ಪಾಕ್ ಧ್ವಜಗಳನ್ನು ಹಾರಿಸಲಾಗುತ್ತಿದೆ. ಇದು ಅಲ್ಲಿನ ಮೂಲಭೂತವಾದಿಗಳು ಉಗ್ರ ಸಂಘಟನೆಯೊಂದಿಗೆ ಸಂಪರ್ಕಿತರಾಗಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಪುಟ್ಟ ಕಾಶ್ಮೀರವನ್ನು ಶರಿಯಾ ಕಾನೂನು ಒಳಗೊಂಡ ಇಸ್ಲಾಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಇವರ ಗುರಿಯಾಗಿದೆ. ಇನ್ನೊಂದು ವರ್ಷದಲ್ಲಿ ಅಲ್ಲಿ ಸುಸೈಡ್ ಬಾಂಬರ್‌ಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ ಎಂದರು.</p>
<p style="text-align: justify;">ದೇಶದ ಹಿತದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಅಲ್ಲಿ ಎಲ್ಲವೂ ಸರಿ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾರಿಗೂ ಅನುಮಾನವಿಲ್ಲ, ಆದರೂ ಕೆಲವರು ಸರ್ಕಾರವನ್ನು ವಿರೋಧಿಸುವ ಉದ್ದೇಶದಿಂದ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸುವುದು ವಿರೋಧ ಪಕ್ಷಗಳ ಕರ್ತವ್ಯ ಎಂಬಂತಾಗಿದೆ ಎಂದರು.</p>
<p>The post <a href="https://mlrlitfest.org/engineered-violence-in-kerala-kashmir/">ಹಿಂದೂ ಮೌಲ್ಯ, ಭಾರತೀಯತೆಯ ನಾಶ ಕಮ್ಯೂನಿಷ್ಟ್, ಜಿಹಾದಿಗಳ ಗುರಿ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಶಬರಿಮಲೆ ಮತ್ತು ಟ್ರಿಪಲ್ ತಲಾಕ್ &#8211; ಒಂದು ಸಂವಾದ</title>
		<link>https://mlrlitfest.org/women-religion-from-triple-talaq-to-shabarimala/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:50:55 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=427</guid>

					<description><![CDATA[<p>Day 2 &#8211; 04-11-2018 at 12.30 pm @ Manthan : Women &#38; Religion &#8211; From Triple Talaq to Shabarimala ದೇಶದ ಗಮನ ಸೆಳೆದ ಮಂಗಳೂರು ಲಿಟ್ ಫೆಸ್ಟ್‌ 2018 ಸಾಹಿತ್ಯ ಉತ್ಸವದ ವೇದಿಕೆಗಳಲ್ಲಿ ನಡೆದ ಸಂವಾದ ಕಾರ್ಯಕ್ರಮಗಳಲ್ಲಿ ವಿಮೆನ್ ಅಂಡ್ ರಿಲಿಜನ್ &#8211; ಫ್ರಂ ಟ್ರಿಪಲ್ ತಲಾಕ್ ಟು ಶಬರಿಮಲ (From Triple Talaq to Sabarimala) ಕಾರ್ಯಕ್ರಮವು ಅತ್ಯಂತ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲಿ ಒಂದಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನೂರಾರು ಸಭಿಕರು</p>
<p>The post <a href="https://mlrlitfest.org/women-religion-from-triple-talaq-to-shabarimala/">ಶಬರಿಮಲೆ ಮತ್ತು ಟ್ರಿಪಲ್ ತಲಾಕ್ &#8211; ಒಂದು ಸಂವಾದ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 12.30 pm @ Manthan : Women &amp; Religion &#8211; From Triple Talaq to Shabarimala</strong></p>
<p style="text-align: justify;"><img loading="lazy" decoding="async" class="aligncenter size-full wp-image-112920" src="https://news13.in/wp-content/uploads/2018/11/women-n-religion-1.jpg" alt="" width="600" height="450" /></p>
<p style="text-align: justify;">ದೇಶದ ಗಮನ ಸೆಳೆದ ಮಂಗಳೂರು ಲಿಟ್ ಫೆಸ್ಟ್‌ 2018 ಸಾಹಿತ್ಯ ಉತ್ಸವದ ವೇದಿಕೆಗಳಲ್ಲಿ ನಡೆದ ಸಂವಾದ ಕಾರ್ಯಕ್ರಮಗಳಲ್ಲಿ ವಿಮೆನ್ ಅಂಡ್ ರಿಲಿಜನ್ &#8211; ಫ್ರಂ ಟ್ರಿಪಲ್ ತಲಾಕ್ ಟು ಶಬರಿಮಲ (From Triple Talaq to Sabarimala) ಕಾರ್ಯಕ್ರಮವು ಅತ್ಯಂತ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲಿ ಒಂದಾಯಿತು.</p>
<p style="text-align: justify;">ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನೂರಾರು ಸಭಿಕರು ನಿಂತುಕೊಂಡೇ ಸಂವಾದವನ್ನು ಆಲಿಸಬೇಕಾಯಿತು. ಪಾಲ್ಗೊಂಡರು. ಇನ್ನೊಬ್ಬರ ನಂಬಿಕೆಯನ್ನು ಗೌರವಿಸುವ ಹಕ್ಕು ಎಲ್ಲರಿಗೂ ಇದೆಯಾದರೂ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವ ಅಧಿಕಾರ ಯಾರಿಗೂ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.</p>
<p style="text-align: justify;">ಶ್ರೀಮತಿ ಮಾಳವಿಕಾ ಅವಿನಾಶ್ ಅವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಯೋಗಿನಿ ಶಾಂಭವಿ ಛೋಪ್ರಾ, ಪ್ರೀತಿ ನಾಗರಾಜ್ ಮತ್ತು ಶ್ರೀಮತಿ ಪದ್ಮಾ ರಾಣಿಯವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿಂದೂ ಸಂಪ್ರದಾಯಗಳನ್ನೇ ಗುರಿ ಮಾಡಲಾಗುತ್ತಿದೆ ಎನ್ನುವ ಅನಿಸಿಕೆ ಅಲ್ಲಿ ವ್ಯಕ್ತವಾಯಿತು.</p>
<p style="text-align: justify;">ಶಬರಿಮಲೆ ಚರ್ಚೆಯು ಆಸ್ತಿಕತೆ ಮತ್ತು ನಾಸ್ತಿಕತೆಗಳ ನಡುವಿನ ಚರ್ಚೆಯೇ ಹೊರತೂ ಅದು ಪುರುಷ ಮತ್ತು ಸ್ತ್ರೀಯರ ನಡುವಿನ ಚರ್ಚೆಯೇ ಅಲ್ಲ ಎನ್ನುವ ವಿಚಾರ ಸಂವಾದದಲ್ಲಿ ಹೊರಹೊಮ್ಮಿತು.</p>
<p style="text-align: justify;">ಸಭಿಕರೊಂದಿಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮವೂ ಕೂಡಾ ಮತ್ತಷ್ಟು ಬಿಸಿಬಿಸಿ ಚರ್ಚೆಗೆ ಪ್ರಚೋದನೆ ನೀಡಿತು.</p>
<p>The post <a href="https://mlrlitfest.org/women-religion-from-triple-talaq-to-shabarimala/">ಶಬರಿಮಲೆ ಮತ್ತು ಟ್ರಿಪಲ್ ತಲಾಕ್ &#8211; ಒಂದು ಸಂವಾದ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಪ್ರಾದೇಶಿಕತೆ ಅಳವಡಿಸಿಕೊಂಡಾಗ ಮಾತ್ರ ಸಿನಿಮಾ ಭಾರತೀಯ ಸಿನಿಮಾವಾಗುತ್ತದೆ</title>
		<link>https://mlrlitfest.org/india-in-cinema-representation-narrative/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:49:09 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=425</guid>

					<description><![CDATA[<p>Day 2 &#8211; 04-11-2018 at 11.30 am @ Two Sides : India in cinema-Representation &#38; Narrative ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಜರುಗಿದ ’ಇಂಡಿಯಾ ಇನ್ ಸಿನಿಮಾ-ರೆಪ್ರಸೆಂಟೇಶನ್ ಆಂಡ್ ನರೇಟಿವ್’ ಎಂಬ ವಿಷಯದ ಸಂವಾದ ಕಾರ್ಯಕ್ರಮ ನಡೆದಿದ್ದು, ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ, ರೋಹಿತ್ ಪದಕಿ ಮತ್ತು ಪ್ರದೀಪ್ ಕೆಂಚನೂರ್ ಇದರಲ್ಲಿ ಭಾಗವಹಿಸಿದ್ದರು. ಸಿನಿಮಾ ಎಂಬುದು ’ಕಟ್ಟಡ ನಿರ್ಮಾಣ’ದಂತೆ. ಅದಕ್ಕೆ ಅದರದ್ದೇ ಆದ ಭಾಷೆಯಿದೆ. ಬಹು ಭಾಷೆಯ, ಬಹು ಪ್ರದೇಶದ, ಬಹು ಅಭಿವ್ಯಕ್ತಿದ</p>
<p>The post <a href="https://mlrlitfest.org/india-in-cinema-representation-narrative/">ಪ್ರಾದೇಶಿಕತೆ ಅಳವಡಿಸಿಕೊಂಡಾಗ ಮಾತ್ರ ಸಿನಿಮಾ ಭಾರತೀಯ ಸಿನಿಮಾವಾಗುತ್ತದೆ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 11.30 am @ Two Sides : India in cinema-Representation &amp; Narrative</strong></p>
<p style="text-align: justify;"><img loading="lazy" decoding="async" class="aligncenter size-full wp-image-112924" src="https://news13.in/wp-content/uploads/2018/11/Rish-shetty-1.jpg" alt="" width="600" height="450" /></p>
<p style="text-align: justify;">ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಜರುಗಿದ ’ಇಂಡಿಯಾ ಇನ್ ಸಿನಿಮಾ-ರೆಪ್ರಸೆಂಟೇಶನ್ ಆಂಡ್ ನರೇಟಿವ್’ ಎಂಬ ವಿಷಯದ ಸಂವಾದ ಕಾರ್ಯಕ್ರಮ ನಡೆದಿದ್ದು, ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ, ರೋಹಿತ್ ಪದಕಿ ಮತ್ತು ಪ್ರದೀಪ್ ಕೆಂಚನೂರ್ ಇದರಲ್ಲಿ ಭಾಗವಹಿಸಿದ್ದರು.</p>
<p style="text-align: justify;">ಸಿನಿಮಾ ಎಂಬುದು ’ಕಟ್ಟಡ ನಿರ್ಮಾಣ’ದಂತೆ. ಅದಕ್ಕೆ ಅದರದ್ದೇ ಆದ ಭಾಷೆಯಿದೆ. ಬಹು ಭಾಷೆಯ, ಬಹು ಪ್ರದೇಶದ, ಬಹು ಅಭಿವ್ಯಕ್ತಿದ ಸಿನಿಮಾವೇ ಭಾರತೀಯ ಸಿನಿಮಾವಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ಭಾರತದ ಸಿನಿಮಾದಲ್ಲಿ ಪರಿವರ್ತನೆಯನ್ನು ನಾವು ಕಾಣುತ್ತೇವೆ. ವಸಾಹತು ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಉಗಮ ಆರಂಭಗೊಂಡಿರುವುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತೀಯ ಮಣ್ಣಿನ ಸೊಗಡನ್ನು ತೋರಿಸುವುದು ಮುಖ್ಯವಾಗಿದೆ. ಆದರೆ ವಾಣಿಜ್ಯೀಕರಣದಿಂದಾಗಿ ಸಿನಿಮಾ ವಿರೂಪಗೊಂಡಿದೆ. ಹಿಂದೂ ತತ್ವದಡಿಯಲ್ಲಿ ಸಿನಿಮಾವನ್ನು ಭಾರತೀಯ ಸಿನಿಮಾವಾಗಿ ಕಾಣಲು ಸಾಧ್ಯ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು.</p>
<p style="text-align: justify;">ರೋಹಿತ್ ಪದಕಿ ಮಾತನಾಡಿ, ಸಿನಿಮಾ ಶುದ್ಧ ಕಲೆ ಆದರೆ ಇದು ಹಣದಿಂದ, ರಾಜಕೀಯದಿಂದ ವಿರೂಪಗೊಂಡಿದೆ. ಹಿಂದೂ ತತ್ವ ಒಂದೇ ಆಗಿರುವುದರಿಂದ ಭಾರತೀಯ ಸಿನಿಮಾದ ಗುರುತಿಸುವಿಕೆ ಸಾಧ್ಯ. ಸಿನಿಮಾ ಮೂಕವಾಗಿದ್ದರೂ, ಅದರ ನಿರೂಪಣೆಯಲ್ಲಿ ಸಂಸ್ಕೃತಿಯಿಂದ ಅದು ಭಾರತೀಯ ಸಿನಿಮಾ ಎಂದು ಗುರುತಿಸಲು ಸಾಧ್ಯವಿದೆ. ಸಂಸ್ಕೃತಿಯ ಸ್ಫೂರ್ತಿ ಗಟ್ಟಿಯಾದಾಗ ಮಾತ್ರ ಸಿನಿಮಾದಲ್ಲಿ ಭಾರತೀಯತೆ ಕಾಣಲು ಸಾಧ್ಯ ಎಂದರು.</p>
<p style="text-align: justify;">ಭಾರತವನ್ನು ಕೆಟ್ಟದಾಗಿ ಚಿತ್ರಿಸಿ ವಿದೇಶದಲ್ಲಿ ಪ್ರದರ್ಶನಕ್ಕಿಡುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತೀಯ ತತ್ವ, ನೈತಿಕತೆ ಭಾರತೀಯ ಸಿನಿಮಾಗೆ ಬೇಕು. ಪಂಚೆಯಿಂದ ಭಾರತೀಯ ಎನಿಸಿಕೊಳ್ಳುವುದಿಲ್ಲ. ವರ್ತನೆಯಿಂದ ಭಾರತೀಯನಾಗುತ್ತೇವೆ ಎಂದರು.</p>
<p style="text-align: justify;">ರಿಷಬ್ ಶೆಟ್ಟಿ ಮಾತನಾಡಿ, ಭಾರತೀಯ ಸಿನಿಮಾ ವೀಕ್ಷಕರು ಅತ್ಯಂತ ಮುಗ್ಧರು. ಪ್ರತಿ 10 ವರ್ಷಗಳಿಗೊಮ್ಮೆ ಸಿನಿಮಾ ಪರಿವರ್ತನೆಗೊಳ್ಳುತ್ತದೆ. 60ರ ದಶಕದ 70ರ ದಶಕದ ಸಿನಿಮಾಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಸಿನಿಮಾವನ್ನು ಸಿನಿಮಾವಾಗಿ ನೋಡಿದಾಗ ಮಾತ್ರ ಅಲ್ಲೊಂದು ಜೀವನ ಕಾಣುತ್ತದೆ. ನಮ್ಮ ಜೀವನಕ್ಕೆ ಅದನ್ನು ಹೋಲಿಕೆ ಮಾಡಲು ಸಾಧ್ಯವಾಗುತ್ತದೆ. ಉತ್ತಮ ಸಾಹಿತಿಗಳು, ಬರಹಗಾರರು ಇದ್ದಾಗ ಸಿನಿಮಾ ಉತ್ತಮವಾಗಿ ಬರುತ್ತದೆ. ಇದಕ್ಕೆ ಮಲಯಾಳಂ ಸಿನಿಮಾ ಉತ್ತಮ ಉದಾಹರಣೆ ಎಂದರು.</p>
<p style="text-align: justify;">ಸಿನಿಮಾದಲ್ಲಿ ಪ್ರಾದೇಶಿಕತೆ ಅಳವಡಿಸಿದಾಗ ಮಾತ್ರ ಅದೊಂದು ದಾಖಲೆಯಾಗಲು ಸಾಧ್ಯ. ಬಾಲಿವುಡ್‌ಗಿಂತ ಹೆಚ್ಚಾಗಿ ಪ್ರಾದೇಶಿಕವಾಗಿ ಹೆಚ್ಚು ವಿಷಯಾಧಾರಿತ ಸಿನಿಮಾಗಳು ಬರುತ್ತಿವೆ. 4 ಜನ ಜ್ಯೂರಿಗಳು ನೋಡುವಂತಹ ಸಿನಿಮಾ ಸಿನಿಮಾ ಅಲ್ಲ, ಸಿನಿಮಾ ಎನ್ನುವುದು ಜನರಿಗೆ ಮನ ಮುಟ್ಟುವಂತಹದ್ದಿರಬೇಕು. ಅವಾರ್ಡ್‌ಗೋಸ್ಕರ ಸಿನಿಮಾ ಅಲ್ಲ. ಸಿನಿಮಾ ನೋಡಿದ ಜನ ಸಂತೃಪ್ತರಾಗಿ ಮಾಡಿದ ಕರತಾಡನವೇ ನನ್ನ ಪಾಲಿನ ಅವಾರ್ಡ್ ಎಂದರು.</p>
<p>The post <a href="https://mlrlitfest.org/india-in-cinema-representation-narrative/">ಪ್ರಾದೇಶಿಕತೆ ಅಳವಡಿಸಿಕೊಂಡಾಗ ಮಾತ್ರ ಸಿನಿಮಾ ಭಾರತೀಯ ಸಿನಿಮಾವಾಗುತ್ತದೆ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಕವಿಸಂಗಮ</title>
		<link>https://mlrlitfest.org/kavighoshti/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:48:01 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=423</guid>

					<description><![CDATA[<p>Day 2 &#8211; 04-11-2018 at 11.15 am @ Manthan : ಕವಿಗೋಷ್ಠಿ ಮಂಗಳೂರು ಲಿಟ್ ಫೆಸ್ಟ್‌ನ ಎರಡನೆಯ ದಿನ ಮಂಥನ ಸಭಾಂಗಣ ಕವಿತೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ನಾಡಿನ‌ ಖ್ಯಾತ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಕರತಾಡನಗಳು ಮೊಳಗುತ್ತಿದ್ದವು. ಸುಬ್ರಾಯ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಧನಂಜಯ ಕುಂಬ್ಳೆಯವರ ಮೀಟೂ, ನಂದಿನಿ ಹೆದ್ದುರ್ಗ ಅವರ ನೀಲಿ, ಡಾ. ವಸಂತಕುಮಾರ್ ಪೆರ್ಲ ಅವರ ಭೋಜರಾಜನ ಸಿಂಹಾಸನ ಕವಿತೆಗಳು ಸಭಿಕರ ಗಮನಸೆಳೆದವು. ತಮ್ಮ ತುಂಟತನದ ಲವಲವಿಕೆಯ</p>
<p>The post <a href="https://mlrlitfest.org/kavighoshti/">ಕವಿಸಂಗಮ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 11.15 am @ Manthan : ಕವಿಗೋಷ್ಠಿ</strong></p>
<p style="text-align: justify;"><img loading="lazy" decoding="async" class="aligncenter size-full wp-image-112912" src="https://news13.in/wp-content/uploads/2018/11/Poets-MLF-1.jpg" alt="" width="600" height="450" /></p>
<p style="text-align: justify;">ಮಂಗಳೂರು ಲಿಟ್ ಫೆಸ್ಟ್‌ನ ಎರಡನೆಯ ದಿನ ಮಂಥನ ಸಭಾಂಗಣ ಕವಿತೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ನಾಡಿನ‌ ಖ್ಯಾತ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಕರತಾಡನಗಳು ಮೊಳಗುತ್ತಿದ್ದವು.</p>
<p style="text-align: justify;">ಸುಬ್ರಾಯ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಧನಂಜಯ ಕುಂಬ್ಳೆಯವರ ಮೀಟೂ, ನಂದಿನಿ ಹೆದ್ದುರ್ಗ ಅವರ ನೀಲಿ, ಡಾ. ವಸಂತಕುಮಾರ್ ಪೆರ್ಲ ಅವರ ಭೋಜರಾಜನ ಸಿಂಹಾಸನ ಕವಿತೆಗಳು ಸಭಿಕರ ಗಮನಸೆಳೆದವು.</p>
<p style="text-align: justify;">ತಮ್ಮ ತುಂಟತನದ ಲವಲವಿಕೆಯ ಧಾಟಿಯ ಕವಿತೆಗಳಿಂದಲೇ ಜನಮನ ಗೆದ್ದ ಹಿರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್, ನವಿಲು ಮತ್ತು ಮುಳ್ಳುಹಂದಿಗಳನ್ನು ಒಂದಾಗಿಸಿ ತಮ್ಮದೇ ರೀತಿಯಲ್ಲಿ ಐಡಿಯಾ ಆಫ್ ಭಾರತ್ ಪರಿಕಲ್ಪನೆಯನ್ನು ತೆರೆದಿಟ್ಟರು. ಅವರ ಟ್ವಿಂಕಲ್ ಮತ್ತು ಅಂಕಲ್ ಕವಿತೆ ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಗಂಭೀರ ಚಿಂತನೆಗೆ ಹಚ್ಚಿತು. ಅವರ ಹಿಂದುತ್ವ ಕವಿತೆ ಎಲ್ಲರ ಗಮನ ಸೆಳೆಯಿತು.</p>
<p style="text-align: justify;">ಹನಿಗವನಗಳ ರಾಜ ಎಂದೇ ಪ್ರಖ್ಯಾತರಾದ ಡುಂಡಿರಾಜ್ ಅವರು ಐಡಿಯಾ ಆಫ್ ಭಾರತ್ ಪರಿಕಲ್ಪನೆಯ ಗಂಭೀರ ಕವಿತೆಯೊಂದನ್ನು ಓದಿದಾಗ ಸಭಿಕರು ಅಚ್ಚರಿಗೊಳಗಾದರು. ನಂತರ ಅವರ ಹನಿಗವಿತೆಗಳನ್ನು ಕೇಳಿದ ಸಭಿಕರು ನಿಮಿಷಕ್ಕೊಮ್ಮೆ ಬಿದ್ದು ಬಿದ್ದು ನಕ್ಕರು.</p>
<p style="text-align: justify;">ಸುಬ್ರಾಯ ಚೊಕ್ಕಾಡಿಯವರ ಅಧ್ಯಕ್ಷೀಯ ಭಾಷಣ ಮತ್ತು ಕವಿತೆಗಳ ವಾಚನದೊಂದಿಗೆ ಕವಿಗೋಷ್ಠಿ ಮುಕ್ತಾಯವಾಯಿತು.</p>
<p>The post <a href="https://mlrlitfest.org/kavighoshti/">ಕವಿಸಂಗಮ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಲ್ಲದು</title>
		<link>https://mlrlitfest.org/overreaching-regulations-and-relentless-faith/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:46:26 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=420</guid>

					<description><![CDATA[<p>Day 2 &#8211; 04-11-2018 at 10.00 am @ Manthan : Overreaching Regulations and Relentless Faith &#8211; Traditions, Courts &#38; Constitution ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾನುವಾರ (ನ. 4) ’ಓವರ್‌ರೀಚಿಂಗ್ ರೆಗ್ಯುಲೇಷನ್ಸ್ ಆಂಡ್ ರಿಲೆಂಟ್‌ಲೆಸ್ ಫೈಥ್-ಟ್ರೆಡಿಷನ್, ಕೋರ್ಟ್ಸ್ ಆಂಡ್ ಕಾನ್ಸ್ಟಿಟ್ಯೂಷನ್ ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆದಿದ್ದು, ಸಂದೀಪ್ ಶಾಸ್ತ್ರೀ, ಲಕ್ಷೀ ಮತ್ತಿಘಟ್ಟ, ಲಕ್ಷ್ಮೀ ಐಯ್ಯಂಗಾರ್ ಅವರು ತೇಜಸ್ವಿ ಸೂರ್ಯ ಅವರೊಂದಿಗೆ ಸಂವಾದಿಸಿದರು. ಹಿಂದೂ ಸಂಪ್ರದಾಯ, ಪದ್ಧತಿಗಳ</p>
<p>The post <a href="https://mlrlitfest.org/overreaching-regulations-and-relentless-faith/">ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಲ್ಲದು</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p style="text-align: justify;"><strong>Day 2 &#8211; 04-11-2018 at 10.00 am @ Manthan : Overreaching Regulations and Relentless Faith &#8211; Traditions, Courts &amp; Constitution</strong></p>
<p style="text-align: justify;"><img loading="lazy" decoding="async" class="aligncenter size-full wp-image-112917" src="https://news13.in/wp-content/uploads/2018/11/tej-surya-1.jpg" alt="" width="600" height="450" /></p>
<p style="text-align: justify;">ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾನುವಾರ (ನ. 4) ’ಓವರ್‌ರೀಚಿಂಗ್ ರೆಗ್ಯುಲೇಷನ್ಸ್ ಆಂಡ್ ರಿಲೆಂಟ್‌ಲೆಸ್ ಫೈಥ್-ಟ್ರೆಡಿಷನ್, ಕೋರ್ಟ್ಸ್ ಆಂಡ್ ಕಾನ್ಸ್ಟಿಟ್ಯೂಷನ್ ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆದಿದ್ದು, ಸಂದೀಪ್ ಶಾಸ್ತ್ರೀ, ಲಕ್ಷೀ ಮತ್ತಿಘಟ್ಟ, ಲಕ್ಷ್ಮೀ ಐಯ್ಯಂಗಾರ್ ಅವರು ತೇಜಸ್ವಿ ಸೂರ್ಯ ಅವರೊಂದಿಗೆ ಸಂವಾದಿಸಿದರು.</p>
<p style="text-align: justify;">ಹಿಂದೂ ಸಂಪ್ರದಾಯ, ಪದ್ಧತಿಗಳ ವಿಷಯದಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ಎಷ್ಟು ಸರಿ ಎಂಬ ಬಗ್ಗೆ ಇಲ್ಲಿ ವಿಷಯ ಚರ್ಚಿತಗೊಂಡಿದ್ದು, ಶಬರಿಮಲೆ ಸೇರಿದಂತೆ ಇತರ ಧಾರ್ಮಿಕ ವಿಷಯಗಳ ಬಗ್ಗೆ ಕೋರ್ಟ್‌ಗಳು ನೀಡಿರುವ ತೀರ್ಪಿನ ಬಗ್ಗೆ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.</p>
<p style="text-align: justify;">ಲಕ್ಷ್ಮೀ ಐಯ್ಯಂಗಾರ್ ಮಾತನಾಡಿ, ಯಾವುದೇ ಧಾರ್ಮಿಕ ಆಚರಣೆಗಳು ಪ್ರಸ್ತುತ ಕಾಲಕ್ಕೆ ಸರಿಹೊಂದುವುದಿಲ್ಲ ಎಂದೆನಿಸಿದಾಗ ಅಥವಾ ಸತಿ ಪದ್ಧತಿಯಂತೆ ತೀವ್ರ ಹಾನಿಕಾರವಾಗಿದೆ ಎಂದೆನಿಸಿದಾಗ ಮಾತ್ರ ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸಬೇಕು. ಒಂದು ವೇಳೆ ಇಡೀ ಧಾರ್ಮಿಕ ವ್ಯವಸ್ಥೆ ತನ್ನ ಮಧ್ಯಪ್ರವೇಶದಿಂದ ನಶಿಸುತ್ತದೆ ಎಂದಾದಾಗ ಕೋರ್ಟ್ ದೂರ ಸರಿಯಬೇಕು ಎಂದರು.</p>
<p style="text-align: justify;">ಸಂದೀಪ್ ಶಾಸ್ತ್ರೀ ಮಾತನಾಡಿ, ದೇಶದಲ್ಲಿ ಕೋರ್ಟ್, ನಿಯಮಗಳು ಇಲ್ಲದೆ ಏನೂ ನಡೆಯಲಾರದು. ಆದರೆ ಧಾರ್ಮಿಕ ವಿಷಯಗಳಲ್ಲಿ ಕೋರ್ಟ್‌ಗಳಿಗೆ ಅತ್ಯಂತ ಕಡಿಮೆ ಪಾತ್ರ ಇದೆ, ಮಿತಿಯಿದೆ. ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗುತ್ತಿದೆ ಎಂದಾದಾಗ, ಸಾರ್ವಜನಿಕರ ಹಿತಾಸಕ್ತಿ ಹೆಚ್ಚಿನ ಮಟ್ಟದಲ್ಲಿದ್ದಾಗ ಮಾತ್ರ ಕೋರ್ಟ್ ಧಾರ್ಮಿಕ ವಿಷಯಗಳಿಗೆ ಮಧ್ಯಪ್ರವೇಶಿಸಬೇಕು. ಎಂದರು.</p>
<p style="text-align: justify;">ಚೈತ್ರ ಮತ್ತಿಘಟ್ಟ ಮಾತನಾಡಿ, ಯಾವುದೇ ಕಾನೂನುಗಳಿಗೆ ಸಂಪ್ರದಾಯಗಳ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಿಂದೂ ಧರ್ಮ ಪುಸ್ತಕ ಆಧಾರಿತ ಧರ್ಮವಲ್ಲ. ಆದರೆ ಕೋರ್ಟ್ ಪುಸ್ತಕಗಳನ್ನು ಆಧರಿಸಿ ಧಾರ್ಮಿಕ ತೀರ್ಪು ನೀಡುತ್ತಿದೆ. ನ್ಯಾಯಾಧೀಶರು, ವಕೀಲರು ಧಾರ್ಮಿಕ ತಜ್ಞತೆಯನ್ನು ಹೊಂದಿಲ್ಲ ಎಂದರು.</p>
<p style="text-align: justify;">ಬಹುಸಂಖ್ಯಾತ ಮಹಿಳೆಯರಿಗೆ ಶಬರಿಮಲೆಗೆ ಹೋಗಲು ಇಷ್ಟವಿಲ್ಲ ಎಂದಾದಾಗ, ಸಾರ್ವಜನಿಕ ಹಿತಾಸಕ್ತಿ ಹಾಕಿದವರ ಹಿಂದಿನ ಅಜೆಂಡಾ ಎಂತದ್ದು ಎಂದು ಕೋರ್ಟ್ ಅರ್ಥ ಮಾಡಿಕೊಳ್ಳಬೇಕಿತ್ತು. ದೇವಸ್ಥಾನಗಳು ಒಂದು ಜನಸಮೂಹಕ್ಕೆ ಸೇರಿದ್ದಾಗಿದ್ದು, ಅಲ್ಲಿನ ನಿಯಮಾವಳಿಗಳನ್ನು ಅವರೇ ನಿರ್ಧರಿಸುತ್ತಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತಾರೆ. ಹಿಂದೂ ಧರ್ಮ ನಿಂತ ನೀರಲ್ಲ, ಅದು ಹರಿಯುತ್ತಿರುವ ನದಿ. ಸಮಯದೊಂದಿಗೆ ಅದು ಪರಿವರ್ತನೆಗೆ ತನ್ನನ್ನು ತೆರೆದುಕೊಂಡಿದೆ. ಹಿಂದೂ ಧರ್ಮವನ್ನು ಇತರ ಧರ್ಮದೊಂದಿಗೆ ಹೋಲಿಸುವ ವರ್ತನೆಗಳು ನಿಲ್ಲಬೇಕು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು.</p>
<p>The post <a href="https://mlrlitfest.org/overreaching-regulations-and-relentless-faith/">ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಲ್ಲದು</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಲಿಟ್ ಫೆಸ್ಟ್‌ನಲ್ಲಿ ಇತಿಹಾಸದ ಹುಡುಕಾಟ</title>
		<link>https://mlrlitfest.org/politics-of-writing-indian-history/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:42:02 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=417</guid>

					<description><![CDATA[<p>Day 2 &#8211; 04-11-2018 at 10.00 am @ Two Sides : Politics of Writing Indian History ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ &#8220;ಮಂಗಳೂರು‌ ಲಿಟ್ ಫೆಸ್ಟ್ 2018&#8221; ಸಾಹಿತ್ಯ ಉತ್ಸವದ ಎರಡನೇ ದಿನದ ಇತಿಹಾಸದ ಕುರಿತ ಸಂವಾದ ಕಾರ್ಯಕ್ರಮ ಸಭಿಕರನ್ನು ಗಂಭೀರ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು. ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳೂ ನೈಜ ಭಾರತೀಯ ಇತಿಹಾಸ ತಿಳಿಸದ ಪಠ್ಯಗಳಿಂದಲೇ ಪ್ರೇರಿತವಾದವು ಮತ್ತು ವಸಾಹತುಶಾಹಿ ಇತಿಹಾಸದ ನಿಜವಾದ ಉದ್ದೇಶವೇ ಇಲ್ಲಿನ</p>
<p>The post <a href="https://mlrlitfest.org/politics-of-writing-indian-history/">ಲಿಟ್ ಫೆಸ್ಟ್‌ನಲ್ಲಿ ಇತಿಹಾಸದ ಹುಡುಕಾಟ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 2 &#8211; 04-11-2018 at 10.00 am @ Two Sides : Politics of Writing Indian History</strong></p>
<p style="text-align: justify;"><img loading="lazy" decoding="async" class="aligncenter size-full wp-image-112905" src="https://news13.in/wp-content/uploads/2018/11/history-MLF-1.jpg" alt="" width="600" height="450" /></p>
<p style="text-align: justify;">ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ &#8220;ಮಂಗಳೂರು‌ ಲಿಟ್ ಫೆಸ್ಟ್ 2018&#8221; ಸಾಹಿತ್ಯ ಉತ್ಸವದ ಎರಡನೇ ದಿನದ ಇತಿಹಾಸದ ಕುರಿತ ಸಂವಾದ ಕಾರ್ಯಕ್ರಮ ಸಭಿಕರನ್ನು ಗಂಭೀರ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.</p>
<p style="text-align: justify;">ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳೂ ನೈಜ ಭಾರತೀಯ ಇತಿಹಾಸ ತಿಳಿಸದ ಪಠ್ಯಗಳಿಂದಲೇ ಪ್ರೇರಿತವಾದವು ಮತ್ತು ವಸಾಹತುಶಾಹಿ ಇತಿಹಾಸದ ನಿಜವಾದ ಉದ್ದೇಶವೇ ಇಲ್ಲಿನ ಸಂಸ್ಕೃತಿಯನ್ನು, ಇತಿಹಾಸವನ್ನು ಮುಚ್ಚಿಡುವುದೇ ಆಗಿತ್ತು ಎನ್ನುವ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.</p>
<p style="text-align: justify;">ಯಾವ ಇತಿಹಾಸವನ್ನು ನಾವು ಕಲಿಯಬೇಕೆನ್ನುವುದನ್ನು ಅಧಿಕಾರಶಾಹಿ ನಿರ್ಧರಿಸುತ್ತಿದೆ. ಭಾರತೀಯ ಸಾಂಪ್ರದಾಯಿಕ ಜ್ಞಾನ ಕಲೆ, ವೈದ್ಯಕೀಯ, ವಿಜ್ಞಾನ&#8230; ಹೀಗೆ ಎಲ್ಲಾ ವಿಭಾಗಗಳಲ್ಲೂ ಅಪಾರವಾಗಿದ್ದು ಆದರೆ ಅದನ್ನು ಕಡೆಗಣಿಸಲಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಯಿತು.</p>
<p style="text-align: justify;">ಪರಕೀಯ ಕ್ರೌರ್ಯವನ್ನೇ ಆದರ್ಶವನ್ನಾಗಿ ತೆಗೆದುಕೊಂಡು ಅದನ್ನೇ ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಯಾವುದೇ ಮುಜುಗರವೂ ಇಲ್ಲದೇ ಹೇಳಿಕೊಳ್ಳುತ್ತಿರುವವರ ಬಗ್ಗೆ ಅಚ್ಚರಿ ವ್ಯಕ್ತವಾಯಿತು. NCRT ಪಠ್ಯಗಳಲ್ಲಿ ಮೈಸೂರು ಒಡೆಯರ ಆಡಳಿತದ ಬಗ್ಗೆ ಪಾಠಗಳಿಲ್ಲ. ಆದರೆ ಪರಕೀಯರ ರಕ್ತ ಚರಿತ್ರೆಗಳಿಗೆ ಅಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಅದರ ಉದ್ದೇಶವೇನು ಎನ್ನುವ ಪ್ರಶ್ನೆ ಸಂವಾದದಲ್ಲಿ ಎದುರಾಯಿತು.</p>
<p style="text-align: justify;">ಸಂವಾದ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯಾನಂತರ ಕೂಡಾ ಇತಿಹಾಸವನ್ನು ಮುಚ್ಚಿಡುವ, ತಿರುಚುವ ಕೆಲಸವಾಗಿರುವ ಬಗ್ಗೆ ಉದಾಹರಣೆಗಳ ಸಮೇತ ಉತ್ತರ ಕಂಡುಕೊಳ್ಳಲಾಯಿತು.</p>
<p style="text-align: justify;">ಯಾವುದೇ ಇತಿಹಾಸ ಪಠ್ಯಗಳನ್ನು ನಾವು ಇದುವರೆಗೂ ಬದಲಾಯಿಸಿಲ್ಲ ಎನ್ನುವುದನ್ನು ಕೇಂದ್ರ ಸಚಿವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ ಸತ್ಯವಾದ ಇತಿಹಾಸ ತಿಳಿಯಲೇ ಬೇಕು. ಅದಕ್ಕೆ ಸಾಕಷ್ಟು ಸಮಯ ಕೂಡಾ ಬೇಕಾಗುತ್ತದೆ. ಅಂತಹಾ ಕಾರ್ಯಗಳಿಗೆ ಇಂತಹಾ ಲಿಟ್ ಫೆಸ್ಟ್­ಗಳು ಪೂರಕವಾಗಿ ಕೆಲಸ ಮಾಡಬಹುದು ಎನ್ನುವ ಆಶಯ ವ್ಯಕ್ತವಾಯಿತು.</p>
<p style="text-align: justify;">ಹಿಂದೂಯಿಸಂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಖ್ಯಾತ ಹಿಂದೂ ಚಿಂತಕ ಡೇವಿಡ್ ಫ್ರಾಲಿಯವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ‌ ಕೂಡಾ ನಡೆಯಿತು.</p>
<p>The post <a href="https://mlrlitfest.org/politics-of-writing-indian-history/">ಲಿಟ್ ಫೆಸ್ಟ್‌ನಲ್ಲಿ ಇತಿಹಾಸದ ಹುಡುಕಾಟ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
		<item>
		<title>ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ‌ ಪ್ರಶಸ್ತಿ ಪ್ರದಾನ</title>
		<link>https://mlrlitfest.org/lifetime-achievement-award-to-padmashri-dr-s-l-bhyrappa/</link>
		
		<dc:creator><![CDATA[mlrfestadmin]]></dc:creator>
		<pubDate>Mon, 12 Nov 2018 12:28:03 +0000</pubDate>
				<category><![CDATA[Sessions 2018]]></category>
		<guid isPermaLink="false">http://mlrlitfest.org/?p=405</guid>

					<description><![CDATA[<p>Day 1 &#8211; 03-11-2018 : Lifetime Achievement Award to Padmashri Dr. S. L. Bhyrappa ಮಂಗಳೂರು ಲಿಟ್ ಫೆಸ್ಟ್‌ ಸಾಹಿತ್ಯ ಸಂಭ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಪದ್ಮಶ್ರೀ ಎಸ್.ಎಲ್.ಭೈರಪ್ಪ ಅವರು ದೇಶದ ಸಮಗ್ರ ಧನಾತ್ಮಕ ಸುದ್ದಿಗಳನ್ನು ನೀಡಲಿರುವ RIGHT NOW APP ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮೂರು ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸಲಾದ ಪುತ್ಥಳಿಯನ್ನು ವಿರೋಧಿಸುವವರು ಅದಕ್ಕೂ ಮುಂಚೆ ಇದೇ ಭಾರತ ದೇಶದ ಗಡಿಗಳಲ್ಲಿ ರಸ್ತೆಗಳನ್ನು</p>
<p>The post <a href="https://mlrlitfest.org/lifetime-achievement-award-to-padmashri-dr-s-l-bhyrappa/">ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ‌ ಪ್ರಶಸ್ತಿ ಪ್ರದಾನ</a> appeared first on <a href="https://mlrlitfest.org">Mangaluru</a>.</p>
]]></description>
										<content:encoded><![CDATA[<p><strong>Day 1 &#8211; 03-11-2018 : Lifetime Achievement Award to Padmashri Dr. S. L. Bhyrappa</strong></p>
<p style="text-align: justify;"><img loading="lazy" decoding="async" class="aligncenter size-full wp-image-112896" src="https://news13.in/wp-content/uploads/2018/11/SLB-3.jpg" alt="" width="600" height="450" /></p>
<p style="text-align: justify;">ಮಂಗಳೂರು ಲಿಟ್ ಫೆಸ್ಟ್‌ ಸಾಹಿತ್ಯ ಸಂಭ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಪದ್ಮಶ್ರೀ ಎಸ್.ಎಲ್.ಭೈರಪ್ಪ ಅವರು ದೇಶದ ಸಮಗ್ರ ಧನಾತ್ಮಕ ಸುದ್ದಿಗಳನ್ನು ನೀಡಲಿರುವ RIGHT NOW APP ಬಿಡುಗಡೆಗೊಳಿಸಿದರು.</p>
<p style="text-align: justify;">ನಂತರ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮೂರು ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸಲಾದ ಪುತ್ಥಳಿಯನ್ನು ವಿರೋಧಿಸುವವರು ಅದಕ್ಕೂ ಮುಂಚೆ ಇದೇ ಭಾರತ ದೇಶದ ಗಡಿಗಳಲ್ಲಿ ರಸ್ತೆಗಳನ್ನು ನಿರ್ಮಿಸಿದೆ, ಎಲ್ಲಾ ಗ್ರಾಮಗಳಿಗೂ ವಿದ್ಯುತ್ತನು ತಲುಪಿಸಿದೆ, ಎಲ್ಲರಿಗೂ ಬ್ಯಾಂಕ್ ಖಾತೆ ತೆರೆಸಿದೆ ಎನ್ನುವುದನ್ನು ಮರೆಯಬಾರದು ಎಂದರು.</p>
<p style="text-align: justify;"><img loading="lazy" decoding="async" class="aligncenter size-full wp-image-112893" src="https://news13.in/wp-content/uploads/2018/11/SLB-1.jpg" alt="" width="600" height="450" /></p>
<p style="text-align: justify;">ಎಸ್.ಎಲ್.ಭೈರಪ್ಪನವರನ್ನು ಕನ್ನಡದಲ್ಲಿ ಬರೆಯುವ ಭಾರತೀಯ ಸಾಹಿತಿ ಎಂದು ಪರಿಚಯಿಸುತ್ತಾರೆ ಎಂದ ಅವರು, ಭೈರಪ್ಪನವರಲ್ಲಿ ಅವರ ಬದುಕು ಕಟ್ಟಿಕೊಟ್ಟಂತಹಾ ಧಾರಣಾ ಸಾಮರ್ಥ್ಯ ಅಪಾರ ಎಂದು ವಿವರಿಸಿದರು.</p>
<p style="text-align: justify;">ಸೀತೆಯ ಮನಸ್ಸಿನ ಆಳಕ್ಕೆ ಇಳಿದು ಅವಳ ಅಂತರಂಗದ ಸಂವೇದನೆಯನ್ನು ವರ್ಣಿಸುವುದು ಭೈರಪ್ಪ ಅವರಿಂದ ಮಾತ್ರ ಸಾಧ್ಯ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.</p>
<p style="text-align: justify;">ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಇಟ್ಟುಕೊಂಡವರು ಎಸ್.ಎಲ್.ಭೈರಪ್ಪನವರು ಎಂದು ಅವರನ್ನು ವರ್ಣಿಸಿದರು.</p>
<p style="text-align: justify;">ಈ ಐಡಿಯಾ ಆಫ್ ಭಾರತ್ ಪರಿಕಲ್ಪನೆಯು ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಎದೆಯೆತ್ತಿ ನುಡಿಯಲು ಪ್ರೇರಣೆಯಾಗಬೇಕು ಎಂದು ಅವರು ಆಶಿಸಿದರು.</p>
<p style="text-align: justify;">ಶ್ರೀಯುತ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಲ್ಪಡುತ್ತಿರುವ ಈ ದಿನ ನಮ್ಮೆಲ್ಲರ ಜೀವಮಾನದಲ್ಲಿ‌ ಮರೆಯಲಾಗದಿನವಾಗಿದೆ ಎಂದು ಅವರು ಅಭಿಮಾನದಿಂದ ನುಡಿದರು.</p>
<p style="text-align: justify;"><img loading="lazy" decoding="async" class="aligncenter size-full wp-image-112897" src="https://news13.in/wp-content/uploads/2018/11/SLB-2.jpg" alt="" width="600" height="450" /></p>
<p style="text-align: justify;">ನಂತರ ಮಂಗಳೂರು ಲಿಟ್ ಫೆಸ್ಟ್‌ ಪರವಾಗಿ ಭೈರಪ್ಪ ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>
<p style="text-align: justify;">ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭೈರಪ್ಪ ಅವರು, ನನ್ನ ಭಾರತದ ಪರಿಕಲ್ಪನೆ ಭಾಷಣದಲ್ಲಾಗಲೀ, ಲೇಖನದಲ್ಲಾಗಲೀ ವಿವರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.</p>
<p style="text-align: justify;">ಇಡೀ ಭಾರತದ ಎಲ್ಲಾ ಹಳ್ಳಿಗಳೂ ಒಂದೇ ರೀತಿ ಇವೆ, ಅಲ್ಲಿನ ಜನಜೀವನದಲ್ಲಿ, ರೀತಿ ನೀತಿಗಳಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ ಎನ್ನುವುದನ್ನು ನಾನು ದೇಶದ ಹಳ್ಳಿಹಳ್ಳಿಗಳನ್ನು ತಿರುಗಿ ಕಂಡುಕೊಂಡಿದ್ದೇನೆ ಎಂದು ಅವರು ತಮ್ಮ‌ಅನುಭವವನ್ನು ಹಂಚಿಕೊಂಡರು.</p>
<p style="text-align: justify;">ರಾಮಾಯಣ, ಮಹಾಭಾರತಗಳು ಹೇಗೆ ನಮ್ಮ‌ ಜನಜೀವನದಲ್ಲಿ ಹಾಗೂ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿವೆ ಎನ್ನುವುದನ್ನು ಲಘು ಹಾಸ್ಯಗಳೊಂದಿಗೆ ಉದಾಹರಣೆಗಳ ಸಮೇತ ವಿವರಿಸಿದರು.</p>
<p style="text-align: justify;">ತಮ್ಮ ಕಾದಂಬರಿಗಳನ್ನು ಉಲ್ಲೇಖಿಸಿದ ಅವರು‌ ಇಡೀ ಭಾರತವೇ ಒಂದು ಎನ್ನುವ ಭಾವನೆ‌ ನನ್ನ ಅಂತರಂಗದಲ್ಲಿರುವುದರಿಂದಲೇ ನನ್ನಿಂದ ಅವುಗಳನ್ನು ಎಲ್ಲ ಕಡೆಗಳಿಗೂ ಸಲ್ಲುವಂತೆ ಬರೆಯಲು ಸಾಧ್ಯವಾಯಿತು ಎಂದರು. ಎಲ್ಲ ಭಾಷೆಗಳಲ್ಲೂ ನನ್ನ ಕಾದಂಬರಿಗಳು ಸ್ವೀಕೃತವಾಗಲು ಅದೇ ಕಾರಣ ಎಂದು ಅವರು ವಿಶ್ಲೇಷಿಸಿದರು.</p>
<p style="text-align: justify;">ನನ್ನ ಬರವಣಿಗೆಗಳಿಗೆ ತೂಕವನ್ನು ತಂದುಕೊಟ್ಟಿದ್ದು ನಾನು ಅಧ್ಯಯನ ಮಾಡಿದ ತತ್ವಶಾಸ್ತ್ರಗಳು ಎಂದ ಅವರು ಒಬ್ಬ ಸೃಜನಶೀಲ ಸಾಹಿತಿಯಾದವನು ವಿಮರ್ಶಕನಾಗಲು ಹೋಗಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>
<p style="text-align: justify;">ನನ್ನ ಸಾಹಿತ್ಯ ಭಾರತೀಯ ಪರಂಪರೆಯ ಸಾಹಿತ್ಯ. ಈ ಕಾರ್ಯಕ್ರಮದ ಭಾರತದ ಪರಿಕಲ್ಪನೆಯಯ ಚರ್ಚೆಗಳನ್ನು ಗಮನಿಸಿದ ನನಗೆ ಮತ್ತೊಂದು ಕಾದಂಬರಿಯನ್ನು ಬರೆಯಲು ಇದೇ ಪ್ರೇರಣೆಯಾದರೂ  ಆಶ್ಚರ್ಯವಿಲ್ಲ ಎಂದ ಅವರು ಇಲ್ಲಿ ತೋರಿಸಿದ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸುವುದಾಗಿ ತಿಳಿಸಿದರು.</p>
<p style="text-align: justify;">
<p>The post <a href="https://mlrlitfest.org/lifetime-achievement-award-to-padmashri-dr-s-l-bhyrappa/">ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ‌ ಪ್ರಶಸ್ತಿ ಪ್ರದಾನ</a> appeared first on <a href="https://mlrlitfest.org">Mangaluru</a>.</p>
]]></content:encoded>
					
		
		
			</item>
	</channel>
</rss>
